ಶ್ರೀಸದ್ಗುರು ಸಾಯಿ ಕ್ರಿಯೇಷನ್ಸ್ ಲಾಂಛನದಲ್ಲಿ ಟಿ.ಎ.ಸೆಂದಿಲ್ ಅವರು ನಿರ್ಮಿಸುತ್ತಿರುವ ‘ಶ್ರೀಸಾಯಿ ಚಿತ್ರಕ್ಕೆ ರೇಣುಕಾಂಬ ಸ್ಟುಡಿಯೊದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
ನಿರ್ಮಾಪಕ ಟಿ.ಎ.ಸೆಂದಿಲ್ ಅವರು ಬರೆದಿರುವ ಕಥೆಗೆ ಓಂ ಸಾಯಿಪ್ರಕಾಶ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಚಂದ್ರು ಸಂಭಾಷಣೆ ಬರೆದಿದ್ದಾರೆ. ಜೆ.ಜಿ.ಕೃಷ್ಣರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಬಲರಾಂ ಸಂಗೀತ ನೀಡುತ್ತಿದ್ದಾರೆ. ಈಶ್ವರ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನವಿರುವ ‘ಶ್ರೀಸಾಯಿ ಚಿತ್ರಕ್ಕೆ ಮದನ್ ಹರಿಣಿ ಅವರ ನೃತ್ಯ ನಿರ್ದೇಶನವಿದೆ.
ಹರೀಶ್ರಾಜ್, ನವೀನ್ಕೃಷ್ಣ, ಶ್ರೀನಿವಾಸಮೂರ್ತಿ, ರಮೇಶ್ಭಟ್, ಜೈಜಗದೀಶ್, ಬ್ಯಾಂಕ್ ಜನಾರ್ದನ್, ಸೆಂದಿಲ್, ದಿಶಾ ಪೂವಯ್ಯ, ರೋಜ, ದೀಪುಗೌಡ, ಭೂಮಿಕ, ಮೀನಾಕ್ಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ವಾರ ತೆರೆಗೆ ‘ರೆಬೆಲ್